ಜೀವ ಕಾನನದಲ್ಲಿ

Author : ಸಿದ್ಧಲಿಂಗ ಪಟ್ಟಣಶೆಟ್ಟಿ

Pages 128

₹ 120.00




Year of Publication: 2021
Published by: ಅನನ್ಯ ಪ್ರಕಾಶನ, ಧಾರವಾಡ
Address: ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-580004
Phone: 94488 61604

Synopsys

‘ಜೀವ ಕಾನನದಲ್ಲಿ’ ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಕವನ ಸಂಕಲನ. ಇಲ್ಲಿ ದಡ, ಪದಪೂಜೆ, ದರ್ಪಣ, ಸಂಜೆ, ಕರೆ, ನಿಂದಕರು, ಭಾಗ್ಯದ ಬಾಗಿಲು, ರಾಡಿ ಬುರುಕ, ನೋ ಬೆಲ್, ಪರಿಣಾಮ, ಬರ, ಉತ್ತರ, ವಿಧಿ, ಹೋಳಿಗೆ ತುಪ್ಪ, ವಾಸನೆ, ನೃತ್ಯ ನದಿ, ವಸ್ತುಸ್ಥಿತಿ, ನಾಗರ ಚಿತ್ತ, ಪ್ರಶ್ನೆ, ಸದ್ದು ಬೇಡ, ಸಂದೇಹ, ಮಂಪರು, ವ್ಯಾಪಾರ, ಸಾವಾಡಿಗರು, ಯಾರಿಗೆ ಯಾರು, ಚಾತುರ್ಯ, ನಿರೀಕ್ಷೆ, ಪತನ, ತಿಪ್ಪೆ, ಆತಂಕ, ನೆನಪು, ಗತಿ, ಸಂಬಂಧ, ಇದು ಬದುಕು, ನಿಡುಗಾಲ, ಕವಿತೆ, ದೈವ, ಕವಲು ದಾರಿ, ರಕ್ತ ಬಂಧ, ಈಗತ್ತೆ, ಅಕಾಲ, ತೊಳಲಾಟ, ಬೀಳು ಮನೆ, ಮುಗುಳು, ಬೇಸರವಿಲ್ಲ, ಸುದ್ಧಿ, ಸಂಧಿಕಾಲ, ಶಕ್ತಿ, ಮಂಜು, ಹದ್ದು, ರೂಪ, ಯುಗಾದಿ, ಗೆಳತಿ, ಕಾಲ ಮಹಿಮೆ, ವೈರಾಣು, ನಾಳೆಯ ಬೆಡಗು, ಹಂಚಿಕೆ, ಕಾಲ ಕಳೆಯಿತು, ತೊಟ್ಟಿಲು, ರೂಪರೂಪ, ಆಕಾಶಕಾಯ, ಭಾರ, ಲೆಕ್ಕ, ಹಂಬಲ, ಪ್ರದಕ್ಷಿಣೆ, ನಿಚ್ಚಣಿಕೆ, ವಿಶಿಷ್ಟ, ಚಟುಲತೆ, ಕಣ್ಣುಮುಚ್ಚಾಟ, ಪ್ರಯಾಣ, ನೆನಪಿಲ್ಲವೇ, ಸಿಹಿ ಬಂಧ, ಶರಣು, ನೀರ ನುಡಿ, ಹೇಮಾ, ಆಸೆ, ಕೊರೊನಾ, ರೇಖಾಚಿತ್ರ, ದ್ವಂದ್ವ, ವಾಸ್ತವ, ಕಾಡುವ ಹಾಡು ಸೇರಿದಂತೆ 81 ಕವಿತೆಗಳ ಜೊತೆಗೆ ಚಿಂತಾಮಣಿ ಕೃತಿಯ ಕುರಿತ ಕೆಲವು ಅಭಿಪ್ರಾಯಗಳು ಸಂಕಲನಗೊಂಡಿವೆ.

About the Author

ಸಿದ್ಧಲಿಂಗ ಪಟ್ಟಣಶೆಟ್ಟಿ
(03 November 1939)

ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು  ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ...

READ MORE

Related Books