ಭಾವದುಯ್ಯಾಲೆ

Author : ಹರಿ ನರಸಿಂಹ ಉಪಾಧ್ಯಾಯ

Pages 88

₹ 100.00




Year of Publication: 2022
Published by: ಹೆಚ್ ಎಸ್ ಆರ್ ಎ ಪ್ರಕಾಶನ
Address: ಬೆಂಗಳೂರು

Synopsys

ಬಂಟ್ವಾಳ ತಾಲೂಕು ಶಂಭೂರಿನ ಹರಿನರಸಿಂಹ ಉಪಾಧ್ಯಾಯ ಇವರ ಮೂರನೆಯ ಕೃತಿ " ಭಾವದುಯ್ಯಾಲೆ " ಕವನ ಸಂಕಲನವು ವೈವಿಧ್ಯಮಯ 75 ಕವನಗಳನ್ನು ಹೊತ್ತ ಕೃತಿಯಾಗಿದ್ದು, ಹಾ ಮ ಸತೀಶರವರ ಮುನ್ನುಡಿ, ಹಾಗೂ ಪದ್ಮನಾಭ ಡಿ ರವರ ಬೆನ್ನುಡಿ ಮತ್ತು ಶ್ರೀಮತಿ ಸುಮಾ ಕಿರಣ್ ರವರ ಆಶಯನುಡಿ ಹೊಂದಿರುತ್ತದೆ. ಶೀರ್ಷಿಕೆಯೇ ವಿಶಿಷ್ಟವಾಗಿರುವಂತೆ ಇಲ್ಲಿನ ಕವನಗಳೂ ವಿಶಿಷ್ಟವಾಗಿವೆ. ಭಾಷಾ ಪ್ರೌಢಿಮೆ, ಪದಲಾಲಿತ್ಯ, ಅರ್ಥ ಗಾಂಭೀರ್ಯಗಳನ್ನು ಒಳಗೊಂಡಿರುತ್ತದೆ. ಬಹಳ ಸುಂದರ, ಸಮಾಜದ ಆಗು ಹೋಗುಗಳನ್ನು ಚಿತ್ರಿಸಿದ ಕವನಗಳು, ಪ್ರಕೃತಿ, ಜೀವನ ಮೌಲ್ಯ, ದೇಶದ, ನಾಡಿನ ಜನತೆಯನ್ನು ಚಿಂತನೆಗೆ ಒಡ್ದುವಂಥ ಕವನಗಳಿದ್ದು ಭವಿಷ್ಯದಲ್ಲಿ ತಾವೊಬ್ಬ ಉತ್ತಮ ಕವಿಯಾಗಿ ಈ ನಾಡಿನಲ್ಲಿ ಬೆಳೆಯಬಲ್ಲರು ಎಂಬುದನ್ನು ನಿರೂಪಿಸಿದ್ದಾರೆ. ಕವನ ಹೇಗಿರಬೇಕು ಎಂಬುದನ್ನು ಹೊಸ ಬರಹಗಾರರಿಗೆ ತಿಳಿಸಿಕೊಟ್ಟಿದ್ದಾರೆ. ತಾಯ್ನುಡಿ ಈ ಕನ್ನಡ ನುಡಿ, ಅಕ್ಷರ ಜಾತ್ರೆ ಕವನಗಳು ನಾಡು ನುಡಿಯ ಬಗ್ಗೆ ಒಲವನ್ನು ಎತ್ತಿ ತೋರಿಸುತ್ತದೆ.

About the Author

ಹರಿ ನರಸಿಂಹ ಉಪಾಧ್ಯಾಯ

ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ನಿವಾಸಿ ಹರಿ ನರಸಿಂಹ ಉಪಾಧ್ಯಾಯ ಅವರ ತಂದೆ ಪಿ ನಾರಾಯಣ ಉಪಾಧ್ಯಾಯ ಹಾಗೂ ತಾಯಿ ಕೆ ಕಮಲಾಕ್ಷಿ.ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗ ನಿಮಿತ್ತ ವಾಸವಾಗಿದ್ದು ಸುಮಾರು 24 ವರ್ಷಗಳಿಂದಲೂ ಮಿತವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಭಾವಗೀತೆ, ಕವನ, ಕಥೆ,ಲೇಖನ, ಗಝಲ್, ಮುಕ್ತಕ, ಛಂದೋಬದ್ಧ ಷಟ್ಪದಿ ಮುಂತಾದ ರಚನೆಗಳಲ್ಲಿಯೂ ಸಾಹಿತ್ಯ ಕೃಷಿ ಮಾಡಿದ್ದಾರೆ. ಬಿಡುಗಡೆಗೊಂಡ ಕವನ ಸಂಕಲನ : ಭಾವಶರಧಿ (2020) 2020 ರಲ್ಲಿ ನವಪರ್ವ ಫೌಂಡೇಶನ್ ನಿಂದ "ನವಪರ್ವ ಸವ್ಯಸಾಚಿ" ಪ್ರಶಸ್ತಿ, ಚಂದನ ಸಾಹಿತ್ಯ ವೇದಿಕೆಯಿಂದ " ಚಂದನ ಸಾಹಿತ್ಯ ...

READ MORE

Related Books